ಸಕಲೇಶಪುರ: ಸಕಲೇಶಪುರ ಎತ್ತಿನಹೊಳೆ ಅನುದಾನವನ್ನು ಬೇರೆ ತಾಲೂಕಿಗೆ ಬಳಕೆ ಮಾಡುತ್ತಿರುವುದು ಖಂಡನೀಯ ಎಂದು ಹೆತ್ತೂರು ಹಾಗೂ ಹೆಬ್ಬಸಾಲೆ ಗ್ರಾಮ ಪಂಚಾಯಿತಿಯ ಸದಸ್ಯರು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾರ್ಯಪಾಲಕ ಅಭಿಯಂತರರವರ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಕಾರರು ಮಾತನಾಡಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆಗಳು ಮಲೆನಾಡು ಭಾಗದಲ್ಲಿ ಸಂಪೂರ್ಣ ಹದಗೆಟ್ಟಿದ್ದು, ಇದರ ಬಗ್ಗೆ ಈ ಹಿಂದೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾರ್ಯಪಾಲಕ ಎಂಜಿನಿಯರ್ ಕಛೇರಿಗೆ ಮನವಿ ಮಾಡಿದ್ದೆವು ಆದರೆ ಅವರು ಸರ್ಕಾರದಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ತಿರಸ್ಕಾರ ಮಾಡುತ್ತ ಬಂದಿದ್ದಾರೆ ಇವರ ಈ ಧೋರಣೆ ಖಂಡಿಸಿ ಪ್ರತಿಭಟನೆ ಮಾಡಿದ್ದೆವು ಎಂದು ಮಾಧ್ಯಮದವರೊಂದಿಗೆ ಆಕ್ರೋಶ ಭರಿತವಾಗಿ ಅಳಲನ್ನು ಹಂಚಿಕೊಂಡರು.

ಹಾಗೆಯೇ ಪ್ರತಿಭಟನಾಕಾರರು ನೀವು ಯಾವ ಮಾನದಂಡದ ಮೇಲೆ ಎತ್ತಿನಹೊಳೆ ಅನುದಾನವನ್ನು ಬಳಸುತ್ತೀದ್ದೀರಿ ಎಂದು ಪ್ರಶ್ನೆ ಮಾಡಿದಾಗ ಪ್ರತಿಭಟನೆಕಾರರ ಪ್ರಶ್ನೆಗೆ ಉತ್ತರಿಸಿದ ಕಾರ್ಯಪಾಲಕ ಎಂಜಿನಿಯರ್ ಆನಂದ ಕುಮಾರ್ ರವರು ನಾವು ಯಾರೇ ಕಾಮಗಾರಿಯ ಅರ್ಜಿ ಅಥವಾ ಪಟ್ಟಿ ಕೊಟ್ಟರು ಸ್ವೀಕರಿಸಿ ಅದನ್ನು ಮುಂದಿನ ಆದೇಶಕ್ಕಾಗಿ ಮೇಲಾಧಿಕಾರಿಗಳಿಗೆ ರವಾನೆ ಮಾಡುವುದಾಗಿ ಉತ್ತರಿಸಿದರು.

ಅವರ ಉತ್ತರಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು ನೀವು ಸರಿಯಾದ ಮಾಹಿತಿ ನೀಡದೇ ಇದ್ದಲ್ಲಿ ನಾವುಗಳು ಯಾವುದೇ ಕಾರಣಕ್ಕೂ ಇನ್ನೂ ಮುಂದೆ ಕಾಮಗಾರಿ ಮಾಡಲು ಬಿಡುವುದಿಲ್ಲವೆಂದು ಆಕ್ರೋಶ ಹೊರ ಹಾಕಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಚ್ಎಂ ವಿಶ್ವನಾಥ್. ಮಾಜಿ ಜಿ. ಪಂ. ಸದಸ್ಯ ಪರ್ವತಯ್ಯ. ಬಿಜೆಪಿ ಮುಖಂಡ ಹೆತ್ತೂರು ದೇವರಾಜ್. ಹೆಬ್ಬಸಾಲೆ ಗ್ರಾ. ಪಂ. ಅಧ್ಯಕ್ಷ ಮಹೇಶ್. ಮೇಘರಾಜ್. ಮಾಸವಳ್ಳಿ ಚಂದ್ರು ಹಾಗೂ ಮತ್ತಿತರರು ಭಾಗವಹಿಸಿದ್ದರು.