ಗುಜರಾತ್ ನ ಮಾಡೆಲ್ ಗುಜರಾತಿಗೆ, ಕರ್ನಾಟಕದ ಮಾಡೆಲ್ ಕರ್ನಾಟಕದಲ್ಲಿ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ. ಇದೇ ತಿಂಗಳು ಕೇಂದ್ರದ ತಂಡ ಕರ್ನಾಟಕಕ್ಕೆ ಬರುತ್ತದೆ. ಮೋದಿ ಪ್ರತಿ 15 ದಿನಕ್ಕೆ ಒಂದು ಬಾರಿ ಕರ್ನಾಟಕಕ್ಕೆ ಬರುತ್ತಾರೆ. ಅಮಿತ್‌ ಶಾ ಪ್ರತಿ ತಿಂಗಳು ನಾಲ್ಕು ಬಾರಿ ಬರುತ್ತಾರೆ. ಇಲ್ಲಿನ ಮಾನದಂಡಗಳು ಏನಿದೆ? ಏನು ಮಾಡಬೇಕೆಂಬುದನ್ನು ಮೋದಿ, ಅಮಿತ್‌ ಶಾ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

ಹೈಲೈಟ್ಸ್‌:

  • ರಾಜ್ಯದಲ್ಲಿ ಚುನಾವಣಾ ತಂತ್ರಗಾರಿಕೆ ನಿರ್ಧರಿಸಲು ಕೇಂದ್ರ ನಾಯಕರ ತಂಡ ಈ ತಿಂಗಳು ರಾಜ್ಯಕ್ಕೆ ಬರಲಿದೆ ಎಂದು ತಿಳಿಸಿದ ಕಂದಾಯ ಸಚಿವ ಅಶೋಕ್
  • ಇನ್ನು ಪ್ರತಿ 15 ದಿನಕ್ಕೊಮ್ಮೆ ಮೋದಿ, ತಿಂಗಳಲ್ಲಿ 4 ಸಲ ಅಮಿತ್ ಶಾ ರಾಜ್ಯಕ್ಕೆ ಬಂದು ಇಲ್ಲಿನ ಮಾನದಂಡಗಳ ಬಗ್ಗೆ ಪರಾಮರ್ಶೆ ನಡೆಸುತ್ತಾರೆ
  • ಗುಜರಾತ್‌ನಂತೆ ಕರ್ನಾಟಕದಲ್ಲೂಕಾಂಗ್ರೆಸ್‌ ಗಂಟುಮೂಟೆ ಕಟ್ಕೊಂಡ್‌ ಹೋಗೋ ಸ್ಥಿತಿ ತಲುಪಿದ್ದು ಆಮ್‌ ಆದ್ಮಿ ಪಾರ್ಟಿ ಸರ್ಫ್ ಹಾಕಿಕೊಂಡು ಕಾಂಗ್ರೆಸನ್ನು ತೊಳೆದಿದೆ

ತುಮಕೂರು: `ಪ್ರಧಾನಿನರೇಂದ್ರ ಮೋದಿ ಪ್ರತಿ 15 ದಿನಕ್ಕೆ ಒಂದು ಬಾರಿ ಕರ್ನಾಟಕಕ್ಕೆ ಬರುತ್ತಾರೆ. ಅಮಿತ್‌ ಶಾ ಪ್ರತಿ ತಿಂಗಳು ನಾಲ್ಕು ಬಾರಿ ಬರುತ್ತಾರೆ. ಇಲ್ಲಿನ ಮಾನದಂಡಗಳು ಏನಿದೆ? ಏನು ಮಾಡಬೇಕೆಂಬುದನ್ನುಅವರು ತೀರ್ಮಾನ ಮಾಡುತ್ತಾರೆ.”

-ಇದು ಕರ್ನಾಟಕದಲ್ಲೂ ಬಿಜೆಪಿ ಗುಜರಾತ್ ಮಾದರಿ ಅನುಸರಿಸುತ್ತದಾ ಎಂಬ ಸುದ್ದಿಗಾರರ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್ ಅವರು ನೀಡಿರುವ ಪ್ರತಿಕ್ರಿಯೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌ ಮಾಡೆಲ್‌ ಗುಜರಾತ್‌ನಲ್ಲೇ. ಕರ್ನಾಟಕ ಮಾಡೆಲ್‌ ಕರ್ನಾಟಕದಲ್ಲಿ. ಇದೇ ತಿಂಗಳು ಕೇಂದ್ರದ ತಂಡ ಕರ್ನಾಟಕಕ್ಕೆ ಬರುತ್ತದೆ. ಮೋದಿ ಪ್ರತಿ 15 ದಿನಕ್ಕೆ ಒಂದು ಬಾರಿ ಕರ್ನಾಟಕಕ್ಕೆ ಬರುತ್ತಾರೆ. ಅಮಿತ್‌ ಶಾ ಪ್ರತಿ ತಿಂಗಳು ನಾಲ್ಕು ಬಾರಿ ಬರುತ್ತಾರೆ. ಇಲ್ಲಿನ ಮಾನದಂಡಗಳು ಏನಿದೆ? ಏನು ಮಾಡಬೇಕೆಂಬುದನ್ನು ಮೋದಿ, ಅಮಿತ್‌ ಶಾ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಯಡಿಯೂರಪ್ಪ ನಾಯಕತ್ವದಲ್ಲೇ ಚುನಾವಣೆ

ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರ ನಾಯಕತ್ವದಲ್ಲೇ ಚುನಾವಣೆ ಮಾಡುತ್ತೇವೆ. ಎಲ್ಲ ಕಡೆ ಜನಸಂಕಲ್ಪ ಯಾತ್ರೆ ಮಾಡಿದ್ದಾರೆ. 2-3 ಟೀಮ್‌ ಮಾಡಿದ್ದೇವೆ. ಯಡಿಯೂರಪ್ಪ ಈಗ ಗುಜರಾತ್‌ನಲ್ಲಿದ್ದಾರೆ. ಗುಜರಾತ್‌ ಮುಖ್ಯಮಂತ್ರಿ ಆಯ್ಕೆ ಮಾಡುವ ಸಂದರ್ಭದಲ್ಲಿ ವೀಕ್ಷಕರಾಗಿ ಯಡಿಯೂರಪ್ಪ ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಸಮಯ ಸಿಕ್ಕಾಗ ಜನಸಂಕಲ್ಪ ಯಾತ್ರೆಗೆ ಬರುತ್ತಾರೆ ಎಂದರು.

ಕಾಂಗ್ರೆಸ್ ಅನ್ನು ಆಪ್ ಸರ್ಫ್ ಹಾಕಿ ತೊಳೆದಿದೆ

ಗುಜರಾತ್‌ನಂತೆ ಕರ್ನಾಟಕದಲ್ಲೂಕಾಂಗ್ರೆಸ್‌ ಗಂಟುಮೂಟೆ ಕಟ್ಕೊಂಡ್‌ ಹೋಗೋ ಸ್ಥಿತಿ ತಲುಪಿದೆ. ಆಮ್‌ ಆದ್ಮಿ ಪಾರ್ಟಿ ಸರ್ಫ್ ಹಾಕಿಕೊಂಡು ನಿರ್ಮಾ ಅನ್ಕೊಂಡ್‌ ಈಗಾಗಲೇ ಕಾಂಗ್ರೆಸನ್ನು ತೊಳೆದಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಲೇವಡಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಸರಕಾರದ ಸಾಧನೆ ಲಿಸ್ಟ್‌ ಕೇಳಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿಯಲ್ಲ. ಅನ್ನ ಭಾಗ್ಯ ಅಕ್ಕಿಗೆ ನರೇಂದ್ರ ಮೋದಿ ಅಕ್ಕಿ ಅಂತ ಹೆಸರಿಡುವ ಕೆಲಸಕ್ಕೆ ಹೋಗಿಲ್ಲ. ಸರಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಆದರೆ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿಯಿಲ್ಲ. ಟೀಕೆ ಮಾಡುವುದೊಂದೇ ಅದರ ಕೆಲಸ. ಮಾಡೋ ಟೀಕೆಯನ್ನು ನ್ಯಾಯವಾಗಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ಗೆ ಕರ್ನಾಟಕದಲ್ಲೂ ಗುಜರಾತ್ ಪರಿಸ್ಥಿತಿಯೇ ಆಗಲಿದೆ
ಎಸ್‌ಟಿ ಮೀಸಲಿನಿಂದ ಕಾಂಗ್ರೆಸ್‌ಗೆ ಸಮಸ್ಯೆಯಾಗಿದೆ. ಕೆಂಪೇಗೌಡ ಪ್ರತಿಮೆ ಮಾಡಿದ ಮೇಲೆ ಇನ್ನೂ ಹೊಟ್ಟೆ ಉರಿ ಶುರುವಾಗಿದೆ. ಟಿಪ್ಪು ಜಯಂತಿ ಮಾಡಿದಾಗ ಕೊಲೆಯಾಯಿತು. ಇದು ಅವರು ಕೊಟ್ಟ ಭಾಗ್ಯ. ಪಿಎಫ್‌ಐ ಅಪರಾಧಿಗಳನ್ನು ಮತ್ತೆ ಬೀದಿಗೆ ಬಿಟ್ಟರು. ಟಿಪ್ಪುಗಾಗಿ ಪ್ರಾಣ ಬಿಡುವ ಕಾಂಗ್ರೆಸ್‌ ರಾಜ್ಯಕ್ಕೆ ಬೇಕಾಗಿಲ್ಲ. ಗುಜರಾತ್‌ನಲ್ಲಿ ಪ್ರತಿಪಕ್ಷವಾಗಲೂ ಯೋಗ್ಯತೆ ಇಲ್ಲದಂತಾಗಿರುವ ಕಾಂಗ್ರೆಸ್‌ ರಾಜ್ಯದಲ್ಲೂಅದೇ ಪರಿಸ್ಥಿತಿ ತಲುಪಲಿದೆ ಎಂದರು